ತುರ್ತು ಪರಿಸ್ಥಿತಿಯ ವಿಧಗಳು, ಭಾರತದ "ತುರ್ತು ಪರಿಸ್ಥಿತಿ " ಯ ಬಳಕೆ

ಭಾರತದಲ್ಲಿ ‘ತುರ್ತು ಪರಿಸ್ಥಿತಿ’

ಕೆಲ ಪರಿಸ್ಥಿತಿಗಳಲ್ಲಿ ಒಂದು ದೇಶದ ಸರ್ಕಾರವು ತನ್ನ ಕೆಲವು ನಿಯಮಿತ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರಜೆಗಳ ವ್ಯವಹಾರಗಳ ಮೇಲೆ ಕೆಲವು ನಿಯಮಗಳನ್ನು ಅಥವ ನಿಯಂತ್ರಣಗಳನ್ನು ತರಬಹುದು. ಇಂತಃ ಪರಿಸ್ಥಿತಿಗಳಿಗೆ ತುರ್ತು ಪರಿಸ್ಥಿತಿ ಎಂದು ಹೆಸರು. ಈ ಘೋಷಣೆಯು ನೈಸರ್ಗಿಕ ವಿಕೋಪಗಳಿಗಿರಬಹುದು, ಯುದ್ಧಕಾಲ ಅಥವ ಪರದೇಶದ ಆಕ್ರಮಣದಿಂದಿರಬಹುದು ಅಥವ ಸಾರ್ವಜನಿಕ ಅಶಾಂತಿಯ ಪರಿಸ್ಥಿತಿಗಾಗಿರಬಹುದು.

ಭಾರತದಲ್ಲಿ ತುರ್ತು ಪರಿಸ್ಥಿತಿಯು ಜೂನ್ -25-1975 ರಿಂದ ಮಾರ್ಚ್-21-1977 ರವರೆಗೆ ಜಾರಿಯಲ್ಲಿತ್ತು.ಆ ಸಮಯದಲ್ಲಿ ‘ಫಕ್ರುದೀನ್ ಅಲಿ ಅಹ್ಮದ್’ಭಾರತದ ರಾಷ್ಟ್ರಪತಿಯಾಗಿದ್ದರು ಮತ್ತು ಶ್ರೀಮತಿ ಇಂದಿರಾಗಾಂಧಿ ಯವರು ಪ್ರದಾನಮಂತ್ರಿಯಾಗಿದ್ದರು. ಭಾರತದಲ್ಲಿ 1975-1977 ರಲ್ಲಿ ಶ್ರೀಮತಿ ಇಂದಿರಾಗಾಂಧಿ ಯವರು ಪ್ರಧಾನಮಂತ್ರಿ ಯಾಗಿದ್ದಾಗ ಅಧಿಕ್ರುತವಾಗಿ ದೇಶಾದ್ಯಂತ ರಾಜ್ಯ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದರು.ಈ ‘ತುರ್ತುಪರಿಸ್ಥಿತಿ’ಯು 21 ತಿಂಗಳುಗಳ ಕಾಲ ಮುಂದುವರೆಯಿತು.ಆಗಿನ ರಾಷ್ಟ್ರಪತಿಯಾಗಿದ್ದ ಫಕ್ರುದ್ದೀನ್ ಅಲಿ ಯವರು ಸಂವಿಧಾನದ 352(1)ನೇ ವಿಧಿಯ ಪ್ರಕಾರ’ಆಂತರಿಕ ತೊಡಕುಗಳ’ನೆಪವೊಡ್ಡಿ ಇದಕ್ಕೆ ಅಧಿಕ್ರುತವಾಗಿ ಒಪ್ಪಿಗೆ ನೀಡಿದರು.ಇದರ ಪರಿಣಾಮವಾಗಿ ತುರ್ತುಪರಿಸ್ಥಿತಿಯು ಜೂನ್-25-1975 ರಿಂದ ಜಾರಿಯಾಯಿತು ಮತ್ತು ಮಾರ್ಚ್-21-1977 ರಲ್ಲಿ ಇದನ್ನು ಹಿಂಪಡೆಯಲಾಯಿತು.ಪ್ರಧಾನಮಂತ್ರಿ ಯವರಿಂದ ಜಾರಿಯಾದ ಈ ತುರ್ತುಪರಿಸ್ಥಿತಿಯು ಅವರ ಸರ್ವಾಧಿಕಾರಿ ಆಡಳಿತವನ್ನು ಸೂಚಿಸಿತು.ಆ ಸಮಯದಲ್ಲಿ ಚುನಾವಣೆಗಳಿಗೆ ಬಹಿಷ್ಕಾರ ಹಾಕಿ, ನಾಗರೀಕ ಹಕ್ಕುಗಳನ್ನು ನಿಷೇದಿಸಲಾಯಿತು.ಹಾಗೂ ಇದಕ್ಕೆ ಪ್ರತಿರೋದ ಒಡ್ಡಿದ ಹೆಚ್ಚಿನ ಗಾಂಧಿವಾಧಿಗಳು ಜೈಲು ಶಿಕ್ಷೆ ಅನುಭವಿಸಬೇಕಾಯಿತು ಮತ್ತು ಇದನ್ನು ಪ್ರಶ್ನಿಸಿದ ಮಾಧ್ಯಮದ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು.ಜೊತೆಗೆ ಇಂದಿರಾರವರ ಮಗ ಸಂಜಯ್ ಗಾಂಧಿಯವರಿಂದ ಸಾಮೂಹಿಕ ಸಂತಾನಹರಣ ಶಸ್ತ್ರಚಿಕಿತ್ಸೆ ಸೇರಿದಂತೆ ಅನೇಕ ದೌರ್ಜನ್ಯಗಳು ವರದಿಯಾದವು.ಈ ಮೂಲಕ ಸ್ವತಂತ್ರ್ಯಭಾರತದ ಇತಿಹಾಸದಲ್ಲಿ ತುರ್ತುಪರಿಸ್ಥಿತಿಯು ವಿವಾದಾತ್ಮಕ ಕಾಲವಾಗಿತ್ತು.

ಭಾರತ ಸಂವಿಧಾನಕ್ಕೆ ತುರ್ತು ಪರಿಸ್ಥಿತಿಯನ್ನು ಜರ್ಮನಿಯ ಸಂವಿಧಾನದಿಂದ ಎರವಲು ಪಡಯಲಾಗಿದೆ. ರಾಷ್ಟ್ರದ ಆರ್ಥಿಕ ಸ್ಥಿರತೆಗೆ ಧಕ್ಕೆಯಾದಾಗ ರಾಷ್ಟ್ರಾಧ್ಯಕ್ಷರು ಆರ್ಥಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು. ರಾಷ್ಟ್ರಾಧ್ಯಕ್ಷರು ಸಂಧಿಗ್ದ ಪರಸ್ಥಿತಿಗಳಲ್ಲಿ ಮೂರು ಬಗೆಯ ತುರ್ತು ಪರಿಸ್ಥಿತಿಗಳನ್ನು ಘೋಷಿಸುವ ಅಧಿಕಾರವನ್ನು ಹೊಂದಿದ್ದಾರೆ. ಮೂರು ವಿಧಗಳೆಂದರೆ:

ರಾಷ್ಟ್ರೀಯ ತುರ್ತು ಪರಿಸ್ಥಿತಿ-352ನೇ ವಿಧಿ:
ಯುದ್ದ ಅಥವಾ ಬಾಹ್ಯ ಆಕ್ರಮಣ ಅಥವಾ ಸಶಸ್ತ್ರ ಬಂಡಾಯ ಇವುಗಳಿಂಧಾಗಿ ಭಾರತದ ಅಥವಾ ಭಾರತದ ಯಾವುದೇ ಭಾಗದ ಭದ್ರತೆಗೆ ತೊಂದರೆಯಾದಾಗ ರಾಷ್ಟ್ರಾಧ್ಯಕ್ಷರು 352ನೇ ವಿಧಿಯನ್ವಯ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು. ರಾಷ್ಟ್ರೀಯ ಭದ್ರತೆಗೆ ತೊಂದರೆಯಾಗಬಹುದೆಂದು ಭಾವಿಸಿದ್ದಲ್ಲಿ ರಾಷ್ಟ್ರಾಧ್ಯಕ್ಷರು ಯುದ್ದ ಅಥವಾ ಬಾಹ್ಯ ಆಕ್ರಮಣ ಅಥವಾ ಸಶಸ್ತ್ರ ಬಂಡಾಯ ಸಂಭವಿಸುವುದಕ್ಕಿಂತ ಮುಂಚಿತವಾಗಿಯೇ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು.

ರಾಜ್ಯ ತುರ್ತು ಪರಿಸ್ಥಿತಿ-356ನೇ ವಿಧಿ: 
ಎರಡು ಆಧಾರಗಳ ಮೇಲೆ ಯಾವುದೇ ರಾಜ್ಯದ ಮೇಲೆ ರಾಷ್ಟ್ರಾಧ್ಯಕ್ಷರ ಆಡಳಿತವನ್ನು ಘೋಷಿಸಬಹುದು.
1. ರಾಜ್ಯ ಸರ್ಕಾರವು ಸಂವಿಧಾನದ ನಿಯಮಗಳಿಗನುಗುಣವಾಗಿ ಆಡಳಿತ ನಡೆಸಲು ವಿಫಲವಾದರೆ 356ನೇ ವಿಧೀಯಡಿಯಲ್ಲಿ ಅಂತಹ ರಾಜ್ಯದ ಮೇಲೆ ರಾಷ್ಟ್ರಾಧ್ಯಕ್ಷರು ತಮ್ಮ ಆಡಳಿತ ಘೋಷಿಸಬಹುದು. ರಾಷ್ಟ್ರಾಧ್ಯಕ್ಷರು ರಾಜ್ಯಪಾಲರ ವರದಿಯನ್ನು ಆಧರಿಸಿ ಘೋಷಿಸಬಹುದು ಅಥವಾ ರಾಜ್ಯಪಾಲರ ವರದಿಯಿಲ್ಲದೇ ತಾವೇ ಘೋಷಿಸಬಹುದು.
2. 356ನೇ ವಿಧಿಯನ್ವಯ ರಾಜ್ಯ ಸರ್ಕಾರವು ಕೇಂದ್ರದಿಂದ ನೀಡಲ್ಪಟ್ಟ ನಿರ್ದೇಶನಗಳನ್ನು ಪಾಲಿಸಲು ಅಥವಾ ಅನುಷ್ಟಾನಗೊಳಿಸಲು ವಿಫಲವಾದರೆ ರಾಷ್ಟ್ರಾಧ್ಯಕ್ಷರು ಅಂತಹ ರಾಜ್ಯದ ಮೇಲೆ ತಮ್ಮ ಆಡಳಿತ ಘೋಷಿಸಬಹುದು.

ಆರ್ಥಿಕ ತುರ್ತು ಪರಿಸ್ಥಿತಿ-360ನೇ ವಿಧಿ:
ಭಾರತದ ಅಥವಾ ಭಾರತದ ಯಾವುದೇ ಭಾಗದಲ್ಲಿ ಆರ್ಥಿಕ ಭದ್ರತೆಗೆ ಧಕ್ಕೆಯೊದಗಿದೆ ಎಂದು ರಾಷ್ಟ್ರಾಧ್ಯಕ್ಷರು ಭಾವಿಸಿದ್ದಲ್ಲಿ 360ನೇ ವಿಧಿಯನ್ವಯ ಅವರು ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಬಹುದು. 1975ರ 38ನೇತಿದ್ದುಪಡಿ ಕಾಯ್ದೆಯ ಪ್ರಕಾರ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿರಲಿಲ್ಲ. ಆದರೆ 1978ರ 44ನೇ ತಿದ್ದುಪಡಿ ಕಾಯ್ದೆಯು ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಸ್ಪಷ್ಟಪಡಿಸುತ್ತದೆ. ಈ ರೀತಿ 44ನೇ ತಿದ್ದುಪಡಿ ಕಾಯ್ದೆಯು ಆರ್ಥಿಕ ತುರ್ತು ಪರಿಸ್ಥಿತಿಯ ಘೋಷಣೆಯನ್ನು ನ್ಯಾಯಿಕ ವಿಮರ್ಶೆಯ ಪರಿಶೀಲನೆಯ ವ್ಯಾಪ್ತಿಗೆ ಒಳಪಡಿಸುತ್ತದೆ.

ಎರಡು ಬಾಹ್ಯ ತುರ್ತು ಪರಿಸ್ಥಿತಿ ಘೋಷಣೆ :

ಭಾರತ ಒಕ್ಕೂಟದಲ್ಲಿ ಇದುವರೆಗೂ ಸಂವಿಧಾನದ 322ನೇ ವಿಧಿ ಅನ್ವಯ ಎರಡು ಬಾಹ್ಯ ತುರ್ತು ಪರಿಸ್ಥಿತಿ ಹಾಗೂ ಒಮ್ಮೆ ಅಂತರಿಕ ತುರ್ತು ಪರಿಸ್ಥಿತಿ ಹೇರಲಾಗಿದೆ. 1962 ರಲ್ಲಿ ಚೀನಾ ಭಾರತದ ಉತ್ತರ ಗಡಿಯ ಮೇಲೆ ದಾಳಿ ಮಾಡಿದಾಗ ಕೇಂದ್ರ ಮಂತ್ರಿ ಮಂಡಲದ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಅಕ್ಟೋಬರ್ 26, 1962 ರಲ್ಲಿ ರಾಷ್ಟ್ರೀಯ ಬಾಹ್ಯ ತುರ್ತು ಪರಿಸ್ಥಿತಿ ಘೋಷಿಸಿದರು. ಈ ತುರ್ತು ಪರಿಸ್ಥಿತಿ ಜನವರಿ 10, 1958 (5 ವರ್ಷ 2 ತಿಂಗಳು) ಮುಂದುವರೆಯಿತು.

ಎರಡನೇ ಬಾರಿ 1971 ರಲ್ಲಿ ಭಾರತ ಪಾಕಿಸ್ತಾನ ಯುದ್ದ ನಡೆದಾಗ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು. ದೇಶದಲ್ಲಿ ಮೊದಲ ಬಾರಿಗೆ ಆಂತರಿಕ ತುರ್ತು ಪರಿಸ್ಥಿತಿಯನ್ನು 352 ನೇ ವಿಧಿ ಅನ್ವಯ ಶ್ರೀಮತಿ ಇಂದಿರಾಗಾಂಧಿಯವರ ಸರ್ಕಾರ ಜೂನ್ 25, 1975 ರ ಮಧ್ಯರಾತ್ರಿ ಘೋಷಿಸಿದರು. ಇದನ್ನು ಮಾರ್ಚ21, 1977 ರಲ್ಲಿ ರಾಷ್ಟ್ರಪತಿಗಳು ರದ್ದುಗೊಳಿಸಿದರು. ಇಂದಿರಾ ಗಾಂಧಿ ಅವರು 1971 ರಲ್ಲಿ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದರು. ಅವರ ಪ್ರತಿಸ್ಪರ್ಧಿಯಾಗಿದ್ದ ರಾಜ್‍ನಾರಾಯಣ್‍ರವರು ಇಂದಿರಾ ಅವರ ಆಯ್ಕೆ ಅಕ್ರಮವಾಗಿ ನಡೆದಿದೆ ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಇಂದಿರಾ ಆಯಕೆಯನ್ನು ಅನೂರ್ಜಿತಗೊಳಿಸಿತು . ಹೈಕೋರ್ಟ್‍ನ ನಿರ್ಧಾರದಿಂದ ವಿಚಲಿತರಾದ ಇಂದಿರಾ ಸರ್ವೋಚ್ಚ ನ್ಯಾಯಾಲಯದಿಂದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ತಂದರು. ರಾಜೀನಾಮೆ ಒತ್ತಡ ತೀವ್ರಗೊಳ್ಳುತ್ತಿದ್ದಂತೆ ತುರ್ತು ಪರಿಸ್ಥಿತಿ ಘೊಷಿಸಿದರು.

# ಇಲ್ಲಿಯವರೆಗೆ ಎಷ್ಟು ಭಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೇರಲಾಗಿದೆ-3 ಬಾರಿ(1962,1971,1975)
# ಕರ್ನಾಟಕದಲ್ಲಿ ಮೊದಲ ಬಾರಿಗೆ ರಾಜ್ಯ ತುರ್ತು ಪರಿಸ್ಥಿತಿ ಹೇರಿದಾಗ ರಾಜ್ಯಪಾಲರಾಗಿದ್ದವರು- ಕೆ.ಧರ್ಮವೀರ

ಸಿನಿಮಾಗಳಲ್ಲಿ ತುರ್ತುಪರಿಸ್ಥಿತಿ :
ಅಮ್ರಿತ್ ನಹತ್ ರವರು ಚಿತ್ರಿಸಿರುವ ಕಿಸ್ಸಾ ಕುರ್ಸಿಕಾ ಸಿನಿಮಾವು ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿಯ ವಿಡಂಬನೆಯಾಗಿದೆ.
1978 ರಲ್ಲಿ ಟಿ.ಎಸ್. ಜೋಹರ್ ರ ನಸ್ಬಂದಿ ಚಿತ್ರವು ತುರ್ತುಪರಿಸ್ಥಿತಿಯ ಬಗ್ಗೆ ಹೇಳುತ್ತದೆ.1980 ರಲ್ಲಿ ಚಿತ್ರಿಸಿದ ಸತ್ಯಜಿತ್ ರೇಸ್ ರವರ ಹಿರಾಕ್ ರಾಜಲ್ ದೇಶೀ, ಮಕ್ಕಳ ಹಾಸ್ಯ ಪ್ರಧಾನ ಚಿತ್ರವಾಗಿದ್ದು ತುರ್ತುಪರಿಸ್ಥಿತಿಯ ಅಪಹಾಸ್ಯವಾಗಿದೆ. ಬಾಲು ಮಹೇಂದರ್ ನಿರ್ಮಾಣದ ಮಲಯಾಳಮ್ ನ ಯಾತ್ರಾ ಚಿತ್ರವು ತುರ್ತುಪರಿಸ್ಥಿತಿಯ ಸಮಯದಲ್ಲಾದ ಮಾನವ ಹಕ್ಕುಗಳ ಉಲ್ಲಂಘನೆಯ ಚಿತ್ರಣವನ್ನು ನೀಡುತ್ತದೆ. ಮರಾಠಿ ಚಿತ್ರ ಶಾಲಾ ತುರ್ತುಪರಿಸ್ಥಿತಿಗೆ ಸಂಬಂದಿಸಿದ ವಿಷಯಗಳನ್ನು ಚರ್ಚಿಸುತ್ತದೆ.

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments