ಭಾರತದ ರಾಷ್ಟ್ರಪತಿಗಳು

ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ .ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ.ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಅವರ ಅನುಪಸ್ಥಿತಿಯಲ್ಲಿ, ಭಾರತದ ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಾಧೀಶರಿಂದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕರಿಸಲಾಗುತ್ತದೆ.

ಸಂಕ್ಷಿಪ್ತ ಇತಿಹಾಸ

15ಆಗಸ್ಟ್ 1947 ರಂದು ಭಾರತವು ಬ್ರಿಟೀಷರಿಂದ ಸ್ವಾತಂತ್ರ್ಯ ಸಾಧಿಸಿತು. ಆರಂಭದಲ್ಲಿ ಕಾಮನ್ವೆಲ್ತ್ ರಾಷ್ಟ್ರದೊಳಗಿನ ಒಂದು ಆಧಿಪತ್ಯವಾಗಿ ಜಾರ್ಜ್ VI ರಾಜನೊಂದಿಗೆ, ಗವರ್ನರ್-ಜನರಲ್ ದೇಶದಲ್ಲಿ ಪ್ರತಿನಿಧಿಸಿದ್ದರು. (ಲಾರ್ಡ್ ಮೌಂಟ್ಬ್ಯಾಟನ್). ಇದಾದ ನಂತರ, ಡಾ. ಬಿ.ಆರ್.ಆಂಬೇಡ್ಕರ್ ಅವರ ನೇತೃತ್ವದಲ್ಲಿ, ಭಾರತದ ಸಾಂವಿಧಾನಿಕ ಅಸೆಂಬ್ಲಿಯು ದೇಶದ ಸಂಪೂರ್ಣ ಸಂವಿಧಾನವನ್ನು ರಚಿಸುವ ಪ್ರಕ್ರಿಯೆಯನ್ನು ಕೈಗೊಂಡಿತು. ಭಾರತದ ಸಂವಿಧಾನವು ಅಂತಿಮವಾಗಿ 26 ನವೆಂಬರ್ 1949 ರಂದು ಜಾರಿಗೊಳಿಸಲ್ಪಟ್ಟಿಸತು, ಮತ್ತು 26 ಜನವರಿ 1950 ರಂದು ಅದು ಜಾರಿಗೆ ಬಂದಿತು, ಜವಾಹರಲಾಲ್ ನೆಹರು ರವರ ಸರ್ಕಾರ ಭಾರತೀಯ ಸಂವಿಧಾನಕ್ಕೆ ಸೂಕ್ತ ಬದಲಾವಣೆಗಳನ್ನು ತಂದು ಗವರ್ನರ್ ಜನರಲ್ ಪದವಿಯನ್ನು ರದ್ದುಗೊಳಿಸಿತು. ಗವರ್ನರ್ ಜನರಲ್‍ರ ಬದಲು ಚುನಾಯಿತ ಅಧ್ಯಕ್ಷರ ಪದವಿ ಸೃಷ್ಟಿಯಾಯಿತು. ಭಾರತದ ಮೊದಲ ಅಧ್ಯಕ್ಷರು ಶ್ರೀ ಬಾಬು ರಾಜೇಂದ್ರ ಪ್ರಸಾದ್.

ಸಾ೦ವಿಧಾನಿಕ ಪಾತ್ರ
ಭಾರತೀಯ ಸಂವಿಧಾನದ ೫೨ನೇ ಪರಿಚ್ಛೇದ ಅಧ್ಯಕ್ಷರ ಪದವಿಯ ಸೃಷ್ಟಿಯನ್ನು ತೋರಿಸುತ್ತದೆ. ಸಂವಿಧಾನದ ಪ್ರಕಾರ, ಭಾರತದ ಅಧ್ಯಕ್ಷರು:

ಭಾರತೀಯ ಪ್ರಜೆಯಾಗಿರಬೇಕು
ಭಾರತದಲ್ಲೇ ಜನಿಸಿದವರಾಗಬೇಕೆಂಬ ನಿಯಮವೇನಿಲ್ಲ
ಎಷ್ಟು ಅವಧಿಗಳಿಗಾದರೂ ಚುನಾಯಿತರಾಗಬಹುದು
ಅಧಿಕೃತವಾಗಿ ಕಾರ್ಯಾಂಗದ ಮುಖ್ಯಸ್ಥರಾದರೂ, ಭಾರತದ ಸರ್ಕಾರದಲ್ಲಿ ಅತ್ಯಂತ ಹೆಚ್ಚು ಅಧಿಕಾರವುಳ್ಳ ಸ್ಥಾನ ಪ್ರಧಾನಮಂತ್ರಿಗಳದ್ದು (ಸಂವಿಧಾನದ ೭೪ ನೆಯ ಪರಿಚ್ಛೇದದಂತೆ). ಭಾರತದ ಸಂವಿಧಾನದ ೫೩ ನೆಯ ಪರಿಚ್ಛೇದದಂತೆ ಸಂಸತ್ತಿಗೆ ಅಧ್ಯಕ್ಷರ ಅಧಿಕಾರವನ್ನು ಬೇರೊಂದು ಪದವಿಯಲ್ಲಿರುವ ವ್ಯಕ್ತಿಗೆ ವರ್ಗಾಯಿಸುವ ಶಕ್ತಿಯುಂಟು.

ಸಾಂಪ್ರದಾಯಿಕವಾಗಿ ಅಧ್ಯಕ್ಷರ ಕೆಲಸಗಳಲ್ಲಿ ಒಂದು ಪ್ರಧಾನಮಂತ್ರಿ ಮತ್ತು ಇತರ ಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮವನ್ನು ನಡೆಸಿಕೊಡುವುದು.

ರಾಷ್ಟ್ರಾಧ್ಯಕ್ಷರ ಚುನಾವಣೆ
ಅಧ್ಯಕ್ಷರನ್ನು ಚುನಾಯಿಸುವ ವ್ಯಕ್ತಿಗಳೆಂದರೆ
ಸಂಸತ್ತಿನ ಎರಡೂ ಸಭೆಗಳ ಲೋಕಸಭೆ ಮತ್ತು ರಾಜ್ಯಸಭೆಗಳ ಚುನಾಯಿತ ಸದಸ್ಯರು.
ಪ್ರತಿ ರಾಜ್ಯದ ವಿಧಾನಸಭೆಯ ಚುನಾಯಿತ ಸದಸ್ಯರು
ಪ್ರತಿ ಸದಸ್ಯರ ಕೈಯಲ್ಲಿರುವ ಮತಗಳ ಸಂಖ್ಯೆ ಅವರ ರಾಜ್ಯದ ಜನಸಂಖ್ಯೆ, ಆ ರಾಜ್ಯದಿಂದ ಇರುವ ಶಾಸಕರ ಸಂಖ್ಯೆ, ಮೊದಲಾದವುಗಳ ಅನುಗುಣವಾಗಿರುತ್ತದೆ.

ಮಹಾಭಿಯೋಗ

ಸಂವಿಧಾನದ ೬೧ ನೆಯ ಪರಿಚ್ಛೇದದ೦ತೆ, ಅಧ್ಯಕ್ಷರು ಭಾರತೀಯ ಸಂವಿಧಾನವನ್ನು ಮೀರಿದ ಸಂದರ್ಭದಲ್ಲಿ ಅವರನ್ನು ತಮ್ಮ ಸ್ಥಾನದಿ೦ದ ತೆಗೆಯುವ ಅಧಿಕಾರ ಸಂಸತ್ತಿಗುಂಟು.

ಪಟ್ಟಿ

೦೧ಡಾ. ರಾಜೇಂದ್ರ ಪ್ರಸಾದ್ಜನವರಿ ೨೬, ೧೯೫೦ಮೇ ೧೩, ೧೯೬೨
೦೨ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ಮೇ ೧೩, ೧೯೬೨ಮೇ ೧೩, ೧೯೬೭
೦೩ಡಾ. ಜಾಕಿರ್ ಹುಸೇನ್ಮೇ ೧೩, ೧೯೬೭ಮೇ ೩, ೧೯೬೯
*ವರಾಹಗಿರಿ ವೆಂಕಟ ಗಿರಿಮೇ ೩, ೧೯೬೯ಜುಲೈ ೨೦, ೧೯೬೯
*ಮಹಮ್ಮದ್ ಹಿದಾಯತುಲ್ಲಾಜುಲೈ ೨೦, ೧೯೬೯ಆಗಸ್ಟ್ ೨೪, ೧೯೬೯
೦೪ವರಾಹಗಿರಿ ವೆಂಕಟ ಗಿರಿಆಗಸ್ಟ್ ೨೪, ೧೯೬೯ಆಗಸ್ಟ್ ೨೪, ೧೯೭೪
೦೫ಫಕ್ರುದ್ದೀನ್ ಅಲಿ ಅಹ್ಮದ್ಆಗಸ್ಟ್ ೨೪, ೧೯೭೪ಫೆಬ್ರವರಿ ೧೧, ೧೯೭೭
*ಬಿ ಡಿ ಜತ್ತಿಫೆಬ್ರವರಿ ೧೧, ೧೯೭೭ಜುಲೈ ೨೫, ೧೯೭೭
೦೬ನೀಲಂ ಸಂಜೀವ ರೆಡ್ಡಿಜುಲೈ ೨೫, ೧೯೭೭ಜುಲೈ ೨೫, ೧೯೮೨
೦೭ಗ್ಯಾನಿ ಜೈಲ್ ಸಿಂಗ್ಜುಲೈ ೨೫, ೧೯೮೨ಜುಲೈ ೨೫, ೧೯೮೭
೦೮ರಾಮಸ್ವಾಮಿ ವೆಂಕಟರಾಮನ್ಜುಲೈ ೨೫, ೧೯೮೭ಜುಲೈ ೨೫, ೧೯೯೨
೦೯ಡಾ. ಶಂಕರ ದಯಾಳ ಶರ್ಮಜುಲೈ ೨೫, ೧೯೯೨ಜುಲೈ ೨೫, ೧೯೯೭
೧೦ಡಾ. ಕೆ ಆರ್ ನಾರಾಯಣನ್ಜುಲೈ ೨೫, ೧೯೯೭ಜುಲೈ ೨೫, ೨೦೦೨
೧೧ಡಾ. ಎ ಪಿ ಜೆ ಅಬ್ದುಲ್ ಕಲಮ್ಜುಲೈ ೨೫, ೨೦೦೨ಜುಲೈ ೨೫, ೨೦೦೭
೧೨ಪ್ರತಿಭಾ ಪಾಟೀಲ್ಜುಲೈ ೨೫, ೨೦೦೭ಜುಲೈ ೨೫, ೨೦೧೨
೧೩ಪ್ರಣಬ್ ಮುಖರ್ಜಿಜುಲೈ ೨೫, ೨೦೧೨೨೫ ಜುಲೈ ೨೦೧೭
೧೪ರಾಮ್‍ನಾಥ್ ಕೋವಿಂದ್ಜುಲೈ ೨೫, ೨೦೧೭ಪ್ರಸಕ್ತ

ರಾಷ್ಟ್ರಪತಿಗಳಿಗೆ ಸಂಬಂಧಿಸಿದ ಪ್ರಶ್ನೆಗಳು
ವಿಷಯ: ರಾಷ್ಟ್ರಪತಿಗಳು

Q)ಪೌರತ್ವ ಹೊಂದಲು ಅರ್ಹತೆಗಳನ್ನು ನೀಡಲು ಯಾರಿಗೆ ಅಧಿಕಾರ ಕೊಡಲಾಗಿದೆ ?
ರಾಷ್ಟ್ರಪತಿ✔️✔️✔️

Q)ಯಾವ ಅಧಾರದ ಮೇಲೆ ರಾಷ್ಟ್ರಪತಿಯನ್ನು ಪದಚ್ಯುತಿಗೊಳಿಸಬಹುದು ?
ಸಂವಿಧಾನದ ಉಲ್ಲಂಘನೆ✔️✔️✔️

Q)ಎರಡು ಬಾರಿ ಭಾರತದ ರಾಷ್ಟ್ರಾಧ್ಯಕ್ಷ ಆಗಿದ್ದವರು ಯಾರು ?
ಡಾ ರಾಜೇಂದ್ರ ಪ್ರಸಾದ್✔️✔️✔️

Q)ಭಾರತದ ಸಂಸತ್ತು ಎಂದರೆ ?
ರಾಜ್ಯಸಭೆ ಲೋಕಸಭೆ ಮತ್ತು ರಾಷ್ಟ್ರಪತಿ✔️✔️✔️

Q)ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ವಿವಾದಗಳನ್ನು ಬಗೆಹರಿಸುವವರು ಯಾರು ?
ಸುಪ್ರೀಮ್ ಕೋಟ್೯✔️✔️✔️

Q)ರಾಷ್ಟ್ರಪತಿಯು ಅವಧಿಗೆ ಮುನ್ನವೇ ರಾಜೀನಾಮೆ ನೀಡಬೇಕೆಂದು ಬಯಸಿದಾಗ ರಾಜೀನಾಮೆ ಪತ್ರವನ್ನು ಯಾರಿಗೆ ಕೊಡಬೇಕಾಗುತ್ತದೆ ?
ಉಪರಾಷ್ಟ್ರಪತಿಗೆ✔️✔️✔️

Q)ರಾಷ್ಟ್ರಧ್ಯಕ್ಷರು ಗರಿಷ್ಟ ಎಷ್ಟು ವಷ೯ ವಯಸ್ಸಿನವರೆಗೆ ಅಧಿಕಾರದಲ್ಲಿ ಇರಬಹುದು ?

ಗರಿಷ್ಟ ವಯೋಮಿತಿ ಇಲ್ಲಾ✔️✔️✔️

Q)ತುತು೯ಪರಿಸ್ಥಿತಿ ಘೋಷಣೆಯ ಅಂತಿಮ ಅಧಿಕಾರವಿರುವುದು ಯಾರಿಗೆ ?
ರಾಷ್ಟ್ರಪತಿಗಳಿಗೆ✔️✔️✔️

Q)ರಾಷ್ಟ್ರಪತಿ ಸ್ಥಾನ ಖಾಲಿ ಇದ್ದಾಗ ಎಷ್ಟು ದಿನಗಳೊಳಗೆ ಆ ಸ್ಥಾನವನ್ನು ತುಂಬಬೇಕು ?
೬ತಿಂಗಳು✔️✔️✔️

Q) ಹಣಕಾಸಿನ ಮಸೂದೆಯನ್ನು ರಾಷ್ಟ್ರಪತಿಗಳ ಅನುಮತಿಯೊಡನೆ ಮಂಡಿಸಬೇಕು ಎಂದು ತಿಳಿಸುವ ಸಂವಿಧಾನದ ವಿಧಿ ಯಾವುದು?
117 ನೇ ವಿಧಿ✔️✔️✔️

Q)ರಾಷ್ಟ್ರಪತಿಯವರು ಸಂಸತ್ತಿಗೆ ಎಷ್ಟು ಜನ ಸದಸ್ಯರನ್ನು ನಾಮಕರಣ ಮಾಡುತ್ತಾರೆ ?
14✔️✔️✔️

Q)ಭಾರತದ ರಾಷ್ಟ್ರಪತಿಯನ್ನು ಯಾರು ಆಯ್ಕೆಮಾಡುತ್ತಾರೆ ?

ಲೋಕಸಭಾ ಮತ್ತು ರಾಜ್ಯಸಭೆ ಮತ್ತು ರಾಜ್ಯಗಳ ವಿಧಾನಸಭೆಯ ಚುನಾಯಿತ ಸದಸ್ಯರಿಂದ ಆಯ್ಕೆಯಾಗುತ್ತಾರೆ ✔️✔️✔️

Q)ಭಾರತದ ರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸು ಕೇಂದ್ರಾಡಳಿತ ಪ್ರದೇಶಗಳು ಯಾವುವು?
ದೆಹಲಿ ಪಾಂಡಿಚೆರಿ✔️✔️✔️

Q) ಸಂವಿಧಾನದ ಯವ ವಿದಿಯ ಅನ್ವಯ ರಾಷ್ಟ್ರಪತಿಗಳು ಪ್ರಧಾನಿಯನ್ನು ನೇಮಕ ಮಾಎಉತ್ತಾರೆ?
75✔️✔️✔️

Q)ರಾಷ್ಟ್ರಾಧ್ಯಕ್ಷರು ಲೋಕಸಭೆಗೆ ಈ ಜನಾಂಗಕ್ಕೆ ಸೇರಿದ ಇಬ್ಬರು ಸದಸ್ಯರನ್ನು ನೇಮಿಸಬಹುದು ?

a) ಪರಿಶಿಷ್ಠ ಜಾತಿ
b) ಪರಿಶಿಷ್ಟ ವರ್ಗ
c) ಆಂಗ್ಲೊ ಇಂಡಿಯನ್ ಜನಾಂಗ
d) ಪಾರ್ಸಿ ಜನಾಂಗ
C✔️✔️✔️

Q)ಭಾರತದ ಎರಡನೇ ರಾಷ್ಟ್ರಪತಿ ಯಾರು?

ಡಾ.ಸರ್ವಪಲ್ಲಿ ರಾಧಾಕೃಷ್ಣನ್✔️✔️✔️

Q)ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ ಯಾರು?
.
ಶ್ರೀಮತಿ ಪ್ರತಿಭಾ ಪಾಟೀಲ್✔️✔️✔️

Q)ಭಾರತದ ರಾಷ್ಟ್ರಪತಿಗಳ ಸಂಬಳವು
ಎ) 1 ಲಕ್ಷ, 
ಬಿ) 1.5 ಲಕ್ಷ, 
ಸಿ) 2 ಲಕ್ಷ, 
ಡಿ) 1.25 ಲಕ್ಷ
B✔️✔️✔️

Q)ಭಾರತದ ರಾಷ್ಟ್ರಪತಿಯಾಗಲು ಕನಿಷ್ಟ ವಯಸ್ಸು?

ಎ) 25 ವರ್ಷ, 
ಬಿ) 21 ವರ್ಷ, 
ಸಿ) 30 ವರ್ಷ, 
ಡಿ) 35 ವರ್ಷ
D✔️✔️✔️

Q)ಭಾರತದ ರಾಷ್ಟ್ರಪತಿಗಳು...?

ಎ) ನಿಜವಾದ ಕಾರ್ಯಪಾಲರು, 
ಬಿ) ನಾಮಮಾತ್ರ ಕಾರ್ಯಪಾಲರು, 
ಸಿ) ಯಾವುದು ಅಲ್ಲ, 
ಡಿ) ಎರಡೂ
B✔️✔️✔️

Q) ಅವಧಿಗೂ  ಮುನ್ನ ರಾಷ್ಟ್ರಪತಿಯವರನ್ನು ಈ ಮೂಲಕ ಕೆಳಗಿಳಿಸಬಹುದು?

ಎ) ದೋಷಾರೋಪಣೆ, 
ಬಿ) ಪ್ರತ್ಯೇಕ ಚುನಾವಣೆ, 
ಸಿ) ಲೋಕಸಭೆ ಸದಸ್ಯರಿಂದ,
ಡಿ) ಯಾವುದು ಅಲ್ಲ
A ✔️✔️✔️

Q) ಸುಪ್ರಿಂ ಕೋರ್ಟ್ ನ್ಯಾಯಾಧೀಶರು ಇವರಿಂದ ನೇಮಿಸಲ್ಪಡುತ್ತಾರೆ?
ಎ) ಪ್ರಧಾನಮಂತ್ರಿ, 
ಬಿ) ರಾಷ್ಟ್ರಪತಿ, 
ಸಿ) ರಾಜ್ಯಪಾಲರು, 
ಡಿ) ಜನಪ್ರತಿನಿಧಿಗಳು'
B✔️✔️✔️

Q)ರಾಷ್ಟ್ರಪತಿಯವರು ಇವರ ಸಲಹೆಯ ಮೇರೆಗೆ ಲೋಕಸಭೆಯನ್ನು ವಿಸರ್ಜಿಸಬಹುದು
ಎ) ನ್ಯಾಯಾಧೀಶರು, 
ಬಿ) ಪ್ರಧಾನಮಂತ್ರಿ,
ಸಿ) ಉಪರಾಷ್ಟ್ರಪತಿ, 
ಡಿ) ಸ್ಪೀಕರ್
B✔️✔️✔️

Q).ಭಾರತದ ರಕ್ಷಣಾ ಪಡೆಯ ಮಹಾದಂಡನಾಯಕ ಯಾರು ?

a) ಪ್ರಧಾನಮಂತ್ರಿ
b) ರಕ್ಷಣಾ ಮಂತ್ರಿ
c) ರಾಷ್ಟ್ರಪತಿ
d) ಗ್ರಹಮಂತ್ರಿ
C✔️✔️✔️

Q)ಭಾರತದ ರಾಷ್ಟ್ರಪತಿಯು ಯಾವುದರ ಅಖಂಡ ಭಾಗವಾಗಿದ್ದಾರೆ ?
ಸಂಸತ್ತಿನ✔️✔️✔️

Q)ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಇವರು ನೇಮಿಸುತ್ತಾರೆ?

a) ರಾಜ್ಯಪಾಲರು
b) ಪ್ರಧಾನ ಮಂತ್ರಿಗಳು
c) ಸುಪ್ರೀಂ ಕೋರ್ಟಿನ ನ್ಯಾಯಾಧೀಶರು
d) ರಾಷ್ಟ್ರಪತಿಗಳು
D✔️✔️✔️

Q).ರಾಷ್ಟ್ರಪತಿಗಳು ತಮ್ಮ ವಿವೇಚನಾಧಿಕಾರ ಬಳಸಬಹುದಾದ ಸಂದರ್ಭ ಯಾವುದು?

a) ತುರ್ತು ಪರಿಸ್ಥಿತಿ ಘೋಷಣೆ ಸಂದರ್ಭದಲ್ಲಿ
b) ಸಚಿವ ಸಂಪುಟದ ಸದಸ್ಯರ ಆಯ್ಕೆಯಲ್ಲಿ
c) ಲೋಕಸಭೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತಗಳಿಸದೇ ಅಸ್ಥಿರ ಪರಿಸ್ಥಿತಿ ಎದುರಾದಾಗ
d) ಯಾವುದೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಸಂದರ್ಭದಲ್ಲಿ
C✔️✔️✔️

Q).ಭಾರತ ಸಂವಿಧಾನಕ್ಕೆ ತಿದ್ದುಪಡಿ ಕಾರ್ಯವಿಧಾನವನ್ನು ಇವರು ಆರಂಭಿಸಬಹುದಾಗಿದೆ...
೧.ರಾಷ್ಟ್ರಪತಿ
೨.ಲೋಕಸಭೆ
೩.ರಾಜ್ಯಸಭೆ
೪.ರಾಜ್ಯ ಶಾಸಕಾಂಗಗಳುಈ ಮೇಲ್ಕಂಡ ಹೇಳಿಕೆಗಳಲ್ಲಿ ಯಾವುದು ಸರಿ
a) 2 ಮಾತ್ರ
b) 1 ಮತ್ತು 2
c) 1, 2 ಮತ್ತು 4
d) 2 ಮತ್ತು 3
D✔️✔️✔️

Q).ಭಾರತ ಸಂವಿಧಾನದ ಪ್ರಕಾರ ಅಟಾರ್ನಿ ಜನರಲ್ ಅವರ ಸಂಬಳವನ್ನು ಯಾರು ನಿರ್ಧರಿಸುತ್ತಾರೆ?
a) ಸಂಸತ್ತು
b) ರಾಷ್ಟ್ರಪತಿ
c) ಪ್ರಧಾನ ಮಂತ್ರಿ
d) ಯೋಜನಾ ಆಯೋಗ
B✔️✔️✔️

Q)ರಾಷ್ಟ್ರಪತಿ ಭವನ ಎಲ್ಲಿದೆ...?
ದೆಹಲಿ✔️✔️✔️

Q)ರಾಷ್ಟ್ರಪತಿ ನಿಲಯ ಎಲ್ಲಿದೆ?
ಸಿಮ್ಲಾ✔️✔️✔️

Q)ರಾಜಭವನ ಎಲ್ಲಿದೆ?
ಹೈದರಾಬಾದ್✔️✔️✔️

Q)123 ವಿಧಿ ಎನನ್ನು ಹೇಳುತ್ತದೆ?
ಸುಗ್ರೀವಾಜ್ಞೆ ✔️✔️✔️

Q)ವಿಧಿ 352 ಏನನ್ನು ಹೇಳುತ್ತದೆ?
ರಾಷ್ಟ್ರ ತುರ್ತು ಪರಿಸ್ಥಿತಿ✔️✔️✔️

Q)ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಷ್ಟು ಬಾರಿ ಜಾರಿಯಾಗಿದೆ?
3 ಬಾರಿ
(1962
1971
1975)✔️✔️✔️

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments